ಒಟ್ಟು ನೋಟಗಳು

Thursday, November 19, 2020

ನಡೆ ನಡೆಯಲೂ ಅವನ ಇರುವಿನ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ನಡೆ ನಡೆಯಲೂ ಅವನ ಇರುವಿನ ಅರಿವಾದಾಗ ಬದುಕಿನ ನಡೆ ಸುಲಭವೋ
ಮನದೊಳು ಅವನ ಮೂರುತಿ ನೆಲೆ ನಿಂತರೆ ದರುಶನ ಸುಲಭವೋ|

ಅವನಾಡುವ ಪ್ರತೀ ಪದವ ಅರಿತರೆ ಬದುಕಿನ ಪಾಠ ಬಲು ಹಗುರವೋ
ಮಾತು ಮನನ ಮಾಡಿ ನಡೆದು ತೋರಿದರೆ ಅವನ ಕರುಣೆ ನಿರಂತರವೋ|

ಅವನ ಆಸ್ಥಾನದಿ ಯಾರೂ ಮೇಲು ಕೀಳೆಂಬ ಭಾವಕೆ ಸ್ಥಳವಿಲ್ಲವೋ
ಸಭೆಯೊಳು ನುಡಿವ ಮಾತದು ಎಲ್ಲರ ಬದುಕಿಗೆ ಸೇರುವಂತಿಹುದೋ|

ಮುಚ್ಚು ಮರೆಎಂಬ ಪದಕಿಲ್ಲಿ ಸ್ಥಳವಿಲ್ಲವೋ ಅದು ಸರ್ವ ವಿದಿತವೋ
ಒಳಗಿಹ ಭಾವಗಳ ಬಡಿದೆಬ್ಬಿಸಿ ತಪ್ಪಿನರಿವ ನಯವಾಗಿ ತಿಳಿಸಿಹದೋ|

ಪ್ರಿಯ ಬಕುತನಿಗರಿವಿಲ್ಲದೆ ಬಂದು ಒದಗುವ ಗುರು ಕಾರುಣ್ಯವೋ
ನೋವ ನೀಗಿ ಬಲವ ನೀಡಿ ಸಂತೈಸುವ ಈ ಗುರುವಿನ ಪರಿ ಅತೀ ದುರ್ಲಭವೋ|

ಓಡುವ ಮನಕೆ ಕಡಿವಾಣ ಹಾಕಿ ಸಾಧನೆಯ ದಾರಿ ತೋರೋ ನನ್ನ ಗುರುವೇ
ಇನ್ನು ತಡಮಾಡದೆ ಎನ್ನ ಕುಕರ್ಮಗಳ ಗಣನೆ ಮಾಡದೆ ಹರಸೋ ಸಖರಾಯಪ್ರಭುವೇ|

1 comment:

  1. Om namo venkatachala avadootarige nanna bhakti haagu poojya namanagalu. Sadaa nimma aashirvaada erali. Hari om tatsat.

    ReplyDelete