ಒಟ್ಟು ನೋಟಗಳು

Wednesday, November 18, 2020

ಸೇವೆಯೊಳು ಮನ ನಿಲ್ಲಿಸಿ - ರಚನೆ : ಶ್ರೀ. ಆನಂದ ರಾಮ್, ಶೃಂಗೇರಿ

ಸೇವೆಯೊಳು ಮನ ನಿಲ್ಲಿಸಿ ನಿನ್ನ ನಾಮವನೇ ಉಸಿರಾಗಿಸಿ ಎನ್ನ ಪೊರೆಯೋ ಪ್ರಭುವೇ
ಜಗದೊಳು ತುಂಬಿಹಾ ವಿಷಯ ವಾಸನೆಗಳ ಮನ ಬಯಸದಿರಲಿ ನನ್ನ  ಗುರುವೇ|

ಇಂದು ಜನಿಸಿದ ಹಸುಗೂಸಿನ ಮನದಂತಿರಲಿ ಎನ್ನ ಮನವು  ಸದಾ ಕಾಲವು
ನೀನೇ ತಿದ್ದಿತೀಡಿ ಮುನ್ನಡೆಸು ಮಾತೆಯಂತೆ ಈ ನನ್ನ  ಬದುಕು  ನಾಳೆಯು|

ಸುಮ್ಮನೆ ಕಾಲ ಕಳೆಯದೆ ಲೌಕಿಕದ ಬಲೆಯೊಳು ಸಿಲುಕದೆ ಈ ನನ್ನ ಮನವು
ನನ್ನೊಡೆಯನ ಅನುಗಾಲವು ಬಜಿಸುತ ಧರೆಗೆ ಭಾರವಾಗದೆ ಇರಲಿ ಈ ಜೀವವು|

ಕರ್ಮದ ಫಲವು ಕಣ್ಣ ಮುಂದೆ ನಿಂತಿರಲು ನೀನಿಲ್ಲದೆ ಬದುಕು ಅಂತ್ಯವು
ಮಿಥ್ಯವನು ಸತ್ಯವೆನುತ ಅನಿತ್ಯದೆಡೆ ಬದುಕುಸಾಗಿಸೆ ಎಚ್ಚರಿಸಿದನು ಗುರುವು|

ಸಾಧಿಸಲು ಮನವ ಹದಗೊಳಿಸಿ ಮಧುರ ಭಾವಗಳ ನಿರಂತರ ಸ್ಫುರಿಸೋ
ಸಖರಾಯಧೀಶನೇ ಒಮ್ಮೆ ಕರುಣದಿ ಮನತುಂಬಿ ಪಾಮರನ ಹರಸೋ|

1 comment:

  1. Guru venkatachala Avara paadagalige nanna bhakti poorvaka namanagalu. Avara asheervada sadaa nammannu kayutalirali.

    ReplyDelete