ಒಟ್ಟು ನೋಟಗಳು

Sunday, November 15, 2020

ದೀಪದ ಹಬ್ಬದ ಈ ಶುಭ ದಿನದಿ - ರಚನೆ: ಶ್ರೀ. ಆನಂದ ರಾಮ್, ಶೃಂಗೇರಿ

ದೀಪದ ಹಬ್ಬದ ಈ ಶುಭ ದಿನದಿ ದೀಪವಾಗಿ ದಾರಿ. ತೋರೋ ಗುರುವೇ
ತಮವನೆಲ್ಲ ಸರಿಸಿ ಮನದೊಳು ಜ್ಞಾನನೀಡುವ ಬೆಳಕಾಗಿ ಬಾರೋ ಗುರುವೇ|

ಇಷ್ಟು ದಿನ ಕತ್ತಲೆಯ ಕೂಪದೊಳು ಮಿಂದೆದ್ದು ಮಂದ ಮತಿಗಳಾದೆವೋ
ಇನ್ನಾದರೂ ಮತಿಯೊಳು ಬೆಳಕ ತುಂಬಿ ನೀ ನಡೆದ ಹಾದಿಯೊಳು ನಡೆಸೋ ದೊರೆಯೇ|

ಬೆಳಕಿನ ಚಿತ್ತಾರವ ಬದುಕಲಿ ಮೂಡಿಸಿ ಮನವ ಅರಳಿಸಿ ಹರಸೋ ಪ್ರಭುವೇ
ಮದ ಮತ್ಸರವೆಂಬ ಧೂಮವ  ತೊಳೆದು ಸಾತ್ವಿಕತೆಯ ತುಂಬೋ  ಗುರುವೇ|

ಲೋಭ ಮೋಹಗಳ ಒಡನಾಟ ನೀಡದೆ ಮನವ ಶುದ್ಧಗೊಳಿಸೋ ಗುರುವೇ
ಕಾಮ ಪ್ರೇಮದೊಳು ಮನ ತೋಯದೆ ನಿಜ ಭಕುತಿ ಪ್ರೇಮ ನೀಡೋ ಪ್ರಭುವೇ|

ಆರು ಅರಿಗಳ ಜಯಿಸಿ ಸದಾ ಮನವ ನಿನ್ನಲಿರಿಸಿ ಎನ್ನ ಕಾಯೋ ಸದ್ಗುರುವೇ
ಸಾಕ್ಷರಾಯಧೀಶನೇ ನಿನ್ನ ಪದಕಮಲದ ಸನಿಹ ಉರಿವ ದೀಪದ ಬತ್ತಿ ನಾನಾಗುವೇ|

1 comment:

  1. Om Namo venkatachala avadootarige nanna poojya namanagalu. Nimma Rakshe sadaa yellara mele erali. Hari om tatsat.

    ReplyDelete