ಒಟ್ಟು ನೋಟಗಳು

Saturday, November 12, 2016

ಶ್ರೀ ಸದ್ಗುರುನಾಥ ಲೀಲಾಮೃತ - ಭಾಗ 2 ನಿತ್ಯ ಸತ್ಸಂಗ ಗ್ರಂಥದ ಲೋಕಾರ್ಪಣೆ 


ಶ್ರೀ ಅವಧೂತ ಪ್ರಕಾಶನ "ಭಗವಾನ್ ಕುಟೀರ", ಡಾ.ಸಿ.ಎಲ್.ರಾಮಣ್ಣ ರಸ್ತೆ, ಶಿವಮೊಗ್ಗ - 577 202 ಇವರಿಂದ ಪ್ರಕಾಶನಗೊಂಡು ಪ್ರಖ್ಯಾತ ಲೇಖಕ ಶ್ರೀ.ಎಸ್.ದತ್ತಾತ್ರಿ (ಭಗವಾನ್) ಅವರ ಲೇಖನಿಯ ಮೂಸೆಯಿಂದ ಹೊರಬಂದ "ಶ್ರೀ ಸದ್ಗುರುನಾಥ ಲೀಲಾಮೃತ - ಭಾಗ 2 ನಿತ್ಯ ಸತ್ಸಂಗ " ಗ್ರಂಥವು ಇದೇ  ತಿಂಗಳ 11ನೇ ನವೆಂಬರ್ 2016, ಶುಕ್ರವಾರ ದಂದು  ಹಾಸನದ  ಹತ್ತಿರದಲ್ಲಿರುವ ಹುಚ್ಚಂಗಿ ಎಂಬ ಸ್ಥಳದಲ್ಲಿ ನಡೆದ ಗುರುವಂದನ ಸಮಾರಂಭದಲ್ಲಿ  ಶ್ರೀ.ಶ್ರೀಕಾಂತಾನಂದ ಸರಸ್ವತಿ ಮಹಾರಾಜ ಅವರ ಅಮೃತ ಹಸ್ತದಿಂದ ಲೋಕಾರ್ಪಣೆಗೊಂಡಿರುತ್ತದೆ. 



ಈ ಗ್ರಂಥವು ಸಖರಾಯಪಟ್ಟಣದ ಅವಧೂತರಾದ ಶ್ರೀ.ವೆಂಕಟಾಚಲ ಅವಧೂತರು ನಡೆಸಿದ ಲೀಲೆಗಳನ್ನು ಕುರಿತ 77 ಅಧ್ಯಾಯಗಳನ್ನು ಒಳಗೊಂಡಿರುತ್ತದೆ. ಈ ಸಂಗ್ರಹ ಯೋಗ್ಯ ಗ್ರಂಥದ ಮುಖಬೆಲೆಯು ಕೇವಲ 140/- ರೂಪಾಯಿಗಳಾಗಿದ್ದು ಆಸಕ್ತ ಗುರು ಬಂಧುಗಳು ಗ್ರಂಥದ ಪ್ರತಿಗಳಿಗಾಗಿ ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದಾಗಿದೆ:

ಶ್ರೀ.ಎಸ್.ದತ್ತಾತ್ರಿ (ಭಗವಾನ್)ಶ್ರೀ ಅವಧೂತ ಪ್ರಕಾಶನ, "ಭಗವಾನ್ ಕುಟೀರ", ಡಾ.ಸಿ.ಎಲ್.ರಾಮಣ್ಣ ರಸ್ತೆ, ಶಿವಮೊಗ್ಗ - 577 202ದೂರವಾಣಿ ಸಂಖ್ಯೆ: 94482 53533


(ಕೃಪೆ: ಶ್ರೀ. ಶ್ರೀ.ಎಸ್.ದತ್ತಾತ್ರಿ (ಭಗವಾನ್)

No comments:

Post a Comment